ಬುಧವಾರ, ಜೂನ್ 2, 2010

ಮರುಜೀವ

ಜೀವಪಯಣದ ಹಾದಿಯಲಿ
ನೀನು ಜೊತೆಗಿರಲು
ಭಾವ ಅಡಗಿಹ ಗೋರಿಯಲಿ
ಹಲವು ಕತೆಯಿರಲು.

ನಿನ್ನ ಮೆಚ್ಚುತ ಹೇಳುವೆನು
ಭಾವ ಕೊಂದವರ
ನೆನಪ ಮರೆವಲಿ ಹೂಳುವೆನು
ಜೀವ ತಿಂದವರ

ಚೆಲುವನರಸುತ ಬಂದವನು
ಎಲ್ಲು ನಿಲಗೊಡದೆ
ಒಲವನಿರಿಸದೆ ಸಂದವನು
ರಮಿಸಿ ಛಲಬಿಡದೆ.

ತನ್ನ ದಾಹವು ನಿಲ್ಲುತಲಿ
ಬಿಟ್ಟು ಓಡಿಹನು
ಬೇರೆ ದೇಹವ ಮೆಲ್ಲುತಲಿ
ಮತ್ತೆ ಕೂಡಿಹನು.

ಕಣ್ಣು ಕಟ್ಟುತ ಮಗದೊಬ್ಬ
ಹಚ್ಚಿ ಹುಣ್ಣುಗಳ
ಕುಡಿಯ ಕಟ್ಟುತ ಹೋಗಿಹನು
ಹಲವು ಹೆಣ್ಣುಗಳ.

ಬಂಧಿಸೆನ್ನನು ಭೋಗಿಸಿದ
ಕರುಳು ಕಡಿವಂತೆ
ಚುಚ್ಚುಮಾತಲಿ ತಾಗಿಸಿದ
ಸರಳು ಸುಡುವಂತೆ.

ನಿನ್ನ ಪ್ರೀತಿಯ ಹೊಳೆಯಲ್ಲಿ
ಮಿಂದು ಕಳೆಯಾದೆ
ನೀನು ಬಿತ್ತಿದ ಬೆಳೆಯಲ್ಲಿ
ನಿಂದು ತಿಳಿಯಾದೆ.

3 ಕಾಮೆಂಟ್‌ಗಳು: