ಸೋಮವಾರ, ಅಕ್ಟೋಬರ್ 5, 2009

ಸತಿಯಾದ ಹೆಣ್ಣು

ಈ ಕವನ ೧೯೮೮ ರಲ್ಲಿ ಪ್ರಕಟವಾದ ನನ್ನ ಕವನಸಂಕಲನ "ಬೆಳ್ಳಿನೊರೆ" ಯದು. ಆಕಾಶವಾಣಿಯಲ್ಲಿ ಕೂಡ ಪ್ರಾಸಾರವಾಗಿದೆ.
ಸತಿಯಾದ ಹೆಣ್ಣು
ಪತಿಯೊಡನೆ ಹೊರಟಿಹಳು
ನೀರು ತುಂಬಿದ ಕಣ್ಣು
ಮೂಲೆಯನು ಹಿಡಿದಿಹಳು
ಕಡಿಯಲಾರದ ದಂಟು
ಹೆತ್ತಬಳ್ಳಿಯ ನಂಟು
ಹೇಳಲಾಗದ ಒಡಲು
ಹರಿದಿಹುದು ಅಳಲ ಬಿಳಲು
ಒಡಹುಟ್ಟಿದವರೊಡನೆ
ಹುಟ್ಟಿಬೆಳೆದೀ ತೌರ
ಒಡೆಯಲಾಗದೆ ಬಳಲಿ
ಕುಳಿತಿಹಳು ಕನಲಿ
ಪರ ಊರ ಹೊಸ ಜನರ
ಸೇರಿ ಬದುಕುವ ಚಿಂತೆ
ಮರೆಯಲಾಗದ ತವರ
ತೊರೆಯುವಳು ಏಕಾಂತೆ
ಪತಿ ತನಗೆ ತೌರೆಂದು
ಕಣ್ಣೊರೆಸಿ ಹೋರಡುವಳು
ಗತಿಯಿಂದ ಪತಿಯೂರ
ಹೆಣ್ಣಾಗಿ ಸೇರುವಳು.

3 ಕಾಮೆಂಟ್‌ಗಳು:

  1. ತೌರ ಬಿಡುವ ಮದುಮಗಳ ಮನದ ವ್ಯಾಕುಲ ನವಿರಾಗಿ ನಿರೂಪಿಸಿದ್ದಿರಾ!

    ಪ್ರತ್ಯುತ್ತರಅಳಿಸಿ
  2. ಬಾವಾ... ಈ ನಡುವೆ ಪರಿಸ್ಥಿತಿ ಉಲ್ಟಾ ಅಗುತ್ತಿದೆಯಲ್ಲ......!!!!!!

    ಪ್ರತ್ಯುತ್ತರಅಳಿಸಿ
  3. ಕಿರಣ ನಿಮ್ಮ ಬ್ಲಾಗ್ ಫಾಲೋ ಗೆ ಲಿಂಕ್ ಕಾಣ್ತಿಲ್ಲ...
    ನಿಮ್ಮ ಕವನಗಳು ಹಳ್ಳಿ ಸೊಗಡಿಗೆ ಲಿಂಕಿಸಿದರೆ ಮನೋಭಾವ ಯಾವ ಸೊಗಡಾದರೂ ಒಂದೇ ಎನ್ನುವುದನ್ನು ಒಳಾರ್ಥದ ಮೂಲಕ ತಿಳಿಸಿದ್ದೀರಿ...ಪದಬಳಕೆ ಹೆಚ್ಚಿಲ್ಲದೆ ಕವನದಲ್ಲಿ ಗಟ್ಟಿತನ ಹೇಗೆ ಸಾಧ್ಯ ಎನ್ನುವುದೂ ಕಾಣುತ್ತದೆ..ನಿಮ್ಮ ಕವನಗಳಲ್ಲಿ... ನಿಮ್ಮ ಶ್ರೀಮತಿ ಸುಮಾರ ಮೂಲಕ ನಿಮ್ಮ ಪರಿಚಯವಾಗಿತ್ತಿರುವುದು ಸಂತಸ ನನಗೆ.

    ಪ್ರತ್ಯುತ್ತರಅಳಿಸಿ