ಶನಿವಾರ, ಜನವರಿ 9, 2010
ಮಹದೇವ
(ವಿಶ್ವೇಶ್ವರಭಟ್ಟರ ಅನಾಥ ಹೆಣಗಳನ್ನು ಚಿತಾಗಾರಕ್ಕೆ ಸಾಗಿಸುವ ಮಹದೇವನ ಕುರಿತಾದ ಲೇಖನದಿಂದ ಪ್ರೇರಿತ)
ಈತನ ಕಥೆಯನು ಕೇಳಿದ ಜನರಿಗೆ
ತುಂಬಲು ನೆಮ್ಮದಿ ಬಸಿರು
ಮಣ್ಣಲು ಶವಗಳು ಕಣ್ಣನು ಬಿಡುವವು
ಕೇಳಲು ಮಾದನ ಹೆಸರು.
ಬಡತನ ಕಾಡಲು ಹುಟ್ಟಿದ ಊರನು
ತೊರೆಯುವ ಘಳಿಗೆಯು ಬರಲು
ಒಡೆತನ ನೋಡಲು ದಿನಗಳ ದೂಡಲು
ಕಷ್ಟವು ಬಳಿಗೇ ಇರಲು
ತಾಯಿಯ ಜೊತೆಯಲಿ ಕೂಳನು ಅರಸುತ
ನಗರವ ಸೇರಿದ ಮಾದ
ರೋಗದಿ ಬಳಲಿದ ತಾಯಿಯು ಹರಸುತ
ಸೇರಲು ದೇವನ ಪಾದ.
ಮುಂದಿನ ಮಾರ್ಗವು ತೋರದೆ ಬದುಕಲಿ
ಕಾಡಲು ಊಟದ ಚಿಂತೆ
ಅನಾಥ ಹೆಣಗಳ ಹೂಳುವ ಕಾರ್ಯವು
ತರುತಿರೆ ಕಾಸಿನ ಕಂತೆ
ಜೀವನಸಾಗಲು ಆಸರೆಯಾಯಿತು
ಸರಕಾರಿ ದವಾಖಾನೆ
ಪಾವನಗೊಳ್ಳುವ ಜೀವನ ನಡೆಸಲು
ಹೊಟ್ಟೆಯಪಾಡ ನಮೂನೆ
ಅನಾಥ ಶವಗಳನ್ನೆತ್ತಿ ಸಾಗಿಸಲು
ಬರುವುದು ಮಾದನ ಗಾಡಿ
ವೈದ್ಯರು ಪರಿಕಿಸಿ ಒತ್ತಿ ಹೇಳಲು
ನಿಲ್ಲಲು ಬಡಿತವು ನಾಡಿ
ಬದುಕಿನ ಕಾಯಕ ಚರಮ ಗಾಯಕ
ದೀನರಪಾಲಿಗೆ ದಿಕ್ಕು
ಮುದುಕನು ಮಾದನು ಶಕ್ತಿಗೆ ಯುವಕನು
ಮಾಡನು ಎಂದೂ ಸೊಕ್ಕು
ಶವವನು ಎಳೆಯುತ ಮಸಣದ ಹಾದಿಯ
ಹಿಡಿವುದು ಮಾದನ ಅಶ್ವ
ತನ್ನವರಿಲ್ಲದೆ ಬದುಕುವ ಮಾದಗೆ
ಮರಣ ಮಸಣವೆ ವಿಶ್ವ
ಕುದುರೆಯು ಕೊನೆಯುಸಿರೆಳೆಯಲು ಮಿತ್ರರು
ಕೊಡಿಸಿದ ವಾಹನ ನಡೆಸಿ
ದೇವಕಾರ್ಯವನು ಕಂಡ ಮಿತ್ರರು
ಉಚಿತ ಇಂಧನವ ಬಡಿಸಿ
ದಿಕ್ಕು ತೋರದ ಶವಗಳ ನೋಡಲು
ಮಿಡಿಯುವ ಕರುಳಿನ ಬಳ್ಳಿ
ತನ್ನೊಡಹುಟ್ಟಿದರೆನ್ನುವ ಭಾವದಿ
ಸಾಗಿಸಿ ತಾಕಿಸಿ ಕೊಳ್ಳಿ
ಸಾವಿನ ಅರ್ಥವ ತಿಳಿಯದೆ ಕೇಳಲು
ಬಂದಿರೆ ತಾಯಿಯ ಸಾವು
ಜೀವನ ಪೂರ್ಣ ಸಾವಿನ ಜೊತೆಯಲಿ
ಕಳೆಯುತ ಗೆದ್ದಿರೆ ನೋವು
ಮಾನವನಾಗಿ ದೇವಗೆ ಸಮನಿರೆ
ಮಸಣಕೆ ಹೆಣಗಳ ಹೊತ್ತು
ಅಸಹ್ಯವೆಣಿಸದೆ ಜಾತಿಯ ಗಣಿಸದೆ
ಗತಿ ಇರದವರಾ ಸ್ವತ್ತು
ವರ್ಷಗಳುರುಳಲು ಕಾರ್ಯದಿ ತೊಡಗಲು
ಮನಸಿರೆ ಗಟ್ಟಿಯು ಮೊರಡು
ಹೆಣಗಳು ಮಸಣಕೆ ಸಾಗಿಹ ಮೊತ್ತವು
ಸಾವಿರ, ನಲವತ್ತೆರಡು
ಮಂದಿರ ನಿರ್ಮಿಸಿ ಮೂರ್ತಿಯ ಸ್ಥಾಪಿಸಿ
ಮಾಡದ ಮಾದನೆ ಗಣ್ಯ
ವಾರಸುದಾರನು ಶವಸಂಸ್ಕಾರಕೆ
ಗಳಿಸಿರೆ ಕೋಟಿಯ ಪುಣ್ಯ
ಸೇವೆಯ ಗುರುತಿಸಿ ಸಂಘ ಸಂಸ್ಥೆಗಳು
ನೀಡಿರೆ ಬಹುಪುರಸ್ಕಾರ
ತೃಪ್ತಿಯ ಹೊಂದಲು ಆಪ್ತಬಂಧುವು
ಮಾಡಲು ಶವಸಂಸ್ಕಾರ
ಪದಗಳ ನಮನವ ಸಲಿಸುವೆ ಬಾಗುತ
ತ್ರಿವಿಕ್ರಮ ಶ್ರೀ ಮಹದೇವ
ಸಾವಿರ ಹೆಣಗಳ ಸಾಗಿಸುತಿರಲು
ಸಾರ್ಥಕವಾಯಿತು ಜೀವ.
-ಸುಧಾಕಿರಣ್ ಅಧಿಕಶ್ರೇಣಿ
ಬುಧವಾರ, ಡಿಸೆಂಬರ್ 2, 2009
ಸಚಿನ್ ತೆಂಡುಲ್ಕರ್
ಬಯಲಲಿ ಇರೆ ಇಪ್ಪತ್ತು ದಾಖಲೆಯಾಗಿರೆ ಎಪ್ಪತ್ತು
ಸವ್ಯಸಾಚಿ ಸಚಿನ್ ಗೆ ಶುಭಕಾಮನೆಗಳು
ವಿಶ್ವವು ಬೆಚ್ಚುವ ಎಸೆವನು ಮೆಚ್ಚುವ
ಕ್ರಿಕೆಟ್ಟಿನಾಟದ ಮಾರ
ರಭಸದಿ ಚೆಚ್ಚುವ ಹಳತನು ಮುಚ್ಚುವ
ಧರೆಯಲೆ ದಾಖಲೆ ಶೂರ.
ಆಡಲು ಬರುತಿರೆ ನೋಡಲು ಈಧರೆ
ಹರ್ಷೋದ್ಗಾರದ ಗಾಳಿ
ಬಯಲಲಿ ಕರಗಲು ಮನದಲಿ ಮರುಗಲು
ಬಾಡುತ ಮುಖ ಎದುರಾಳಿ.
ಸೂಕ್ಷ್ಮದಿ ವೀಕ್ಷಿಸಿ ಕ್ಷೇತ್ರವ ರಕ್ಷಿಸಿ
ಆಡುವ ವೈಖರಿ ಚೆಂದ
ಓಟದ ಸುರಿಮಳೆ ಬರಿಸಲು ಈ ಇಳೆ
ಸಂತಸ ನೆರೆಯಲಿ ಬಂಧ.
ಅಟ್ಟುವ ಚೆಂಡಿನ ವೇಗವು ಗುಂಡಿನ
ಕ್ಷಣದಲಿ ಮುಟ್ಟಲು ನಾಕು
ಕುಟ್ಟುವ ರೀತಿಗೆ,ತಪ್ಪದ ನೀತಿಗೆ
ಜಗದಿರೆ ಮೆಚ್ಚುಗೆ ಸಾಕು.
ವೇಗದ ಎಸೆತಕೆ, ಎತ್ತಲು ಗಗನಕೆ
ಕಾಣದ ಚೆಂಡಿನ ಪಥವು
ಆರು ನಾಕುಗಳು ಸೇರಲು ಮೊತ್ತವು
ಮೆರೆಯಲು ದಾಖಲೆ ರಥವು.
ಟೀಕೆಯ ಮಾಡದೆ ದುರುದುರು ನೋಡದೆ
ಗಳಿಸಿರೆ ಎಲ್ಲರ ನೇಹ
ಸೋಲಲು ಬಾಡದೆ, ತೀರ್ಪಿಗೆ ಕಾಡದೆ
ಗೂಡನು ಸೇರುವ ಗೇಹ.
ಸಾವಿರ ಸಾವಿರ ಓಟವ ಕೂಡಲು
ವಿಶ್ವದ ಎತ್ತರ ವ್ಯಕ್ತಿ
ಆಟದ ಸಮಯದಿ ಮುಳುಗುತ ವಿನಯದಿ
ತೋರಲು ಅನುಪಮ ಭಕ್ತಿ.
ವಿಶ್ವವು ಮಣಿಯುವ ಹೆಮ್ಮೆಗೆ ಕುಣಿಯುವ
ಭಾರತ ಮಾತೆಯ ಪುತ್ರ
ಆಡಲುದಣಿಯನು ಆಡುತ ತಣಿಯನು
ದಾಖಲೆಗಗನದ ಮಿತ್ರ.
ದೈತ್ಯರ ದೇಹವ ಕಾಣುತ ಕ್ಷೇತ್ರದಿ
ದುರ್ಬಲನಾಗುತ ನಡುಗ
ಅಬ್ಬರದಲಿ ಹುಬ್ಬೇರಿಪ ಕ್ಷಾತ್ರದಿ
ಜಯಿಸುವ ನೀಲಿಯ ಹುಡುಗ.
ಎಸೆವನ, ರಾತ್ರಿಯ ಕನಸಲಿ ಬರುತಿರೆ
ಕೆಡಿಸುತ ಸೊಗಸಿನ ನಿದ್ದೆ
ಮರುದಿನ ನನಸಲಿ ದಾಂಡನು ತರುತಿರೆ
ಬೆವರಿಗೆ ಮೈಮನ ಒದ್ದೆ.
ಆಡುತ ಆಡುತ ಆಟದಿ ತೋರಲು
ಗಗನದಿ ಆರರ ಚಿತ್ರ
ನೋಡುತ ಜನಗಳ ಭಾವವೆ ಕಾಡಲು
ಕಳಿಸಲು ಮೆಚ್ಚುಗೆ ಪತ್ರ.
ನಲವತ್ತೈದನೆ ನೂರಿನ ದಾಖಲೆ
ಬರೆ ಏಕದಿನದ ಪಂದ್ಯ
ಹಿರಿಮೆ ಗರಿಮೆಗಳು ತೂರಿಬರುತಿರಲು
ಸಂತಸವೇರಿರೆ ವಿಂಧ್ಯ.
ನೂರರ ಕಟ್ಟನು ಟೆಸ್ಟಲಿ ತಟ್ಟಲು
ನಲವತ್ತೆರಡನೆಯ ಶತಕ
ಸ್ಫೂರ್ತಿಯ ಚಿಲುಮೆಗೆ ನಾಡಿನ ಒಲುಮೆಗೆ
ತೂಗಿರಿ ಸಚಿನರ ಫಲಕ.
ಗುರುವಾರ, ನವೆಂಬರ್ 26, 2009
ಪೇಪರ್ ಬಾಯ್
ಸೋಮವಾರ, ಅಕ್ಟೋಬರ್ 5, 2009
ಸತಿಯಾದ ಹೆಣ್ಣು
ಸತಿಯಾದ ಹೆಣ್ಣು
ಪತಿಯೊಡನೆ ಹೊರಟಿಹಳು
ನೀರು ತುಂಬಿದ ಕಣ್ಣು
ಶುಕ್ರವಾರ, ಸೆಪ್ಟೆಂಬರ್ 11, 2009
ಸೌರ ಅಭಯ
ಜಗದ ದೊಡ್ಡ ಹೆದರಿಕೆ
ಬೇಗ ಮುಗಿವ ಇಂಧನ
ಬಗೆದು ಹಾಕಿ ಬೆದರಿಕೆ
ಸೌರ ಶಕ್ತಿ ಮುಂದಿನ