ಜೀವಪಯಣದ ಹಾದಿಯಲಿ
ನೀನು ಜೊತೆಗಿರಲು
ಭಾವ ಅಡಗಿಹ ಗೋರಿಯಲಿ
ಹಲವು ಕತೆಯಿರಲು.
ನಿನ್ನ ಮೆಚ್ಚುತ ಹೇಳುವೆನು
ಭಾವ ಕೊಂದವರ
ನೆನಪ ಮರೆವಲಿ ಹೂಳುವೆನು
ಜೀವ ತಿಂದವರ
ಚೆಲುವನರಸುತ ಬಂದವನು
ಎಲ್ಲು ನಿಲಗೊಡದೆ
ಒಲವನಿರಿಸದೆ ಸಂದವನು
ರಮಿಸಿ ಛಲಬಿಡದೆ.
ತನ್ನ ದಾಹವು ನಿಲ್ಲುತಲಿ
ಬಿಟ್ಟು ಓಡಿಹನು
ಬೇರೆ ದೇಹವ ಮೆಲ್ಲುತಲಿ
ಮತ್ತೆ ಕೂಡಿಹನು.
ಕಣ್ಣು ಕಟ್ಟುತ ಮಗದೊಬ್ಬ
ಹಚ್ಚಿ ಹುಣ್ಣುಗಳ
ಕುಡಿಯ ಕಟ್ಟುತ ಹೋಗಿಹನು
ಹಲವು ಹೆಣ್ಣುಗಳ.
ಬಂಧಿಸೆನ್ನನು ಭೋಗಿಸಿದ
ಕರುಳು ಕಡಿವಂತೆ
ಚುಚ್ಚುಮಾತಲಿ ತಾಗಿಸಿದ
ಸರಳು ಸುಡುವಂತೆ.
ನಿನ್ನ ಪ್ರೀತಿಯ ಹೊಳೆಯಲ್ಲಿ
ಮಿಂದು ಕಳೆಯಾದೆ
ನೀನು ಬಿತ್ತಿದ ಬೆಳೆಯಲ್ಲಿ
ನಿಂದು ತಿಳಿಯಾದೆ.
ಬಹಳದಿನದ ಮೇಲೆ ನಾಗ೦ದಿಗೆಯಲ್ಲಿ ಕವನ ಹಾಕಿದ್ದಿರಾ... ಚೆನ್ನಾಗಿದೆ ಸಾರ್.
ಪ್ರತ್ಯುತ್ತರಅಳಿಸಿಒಳ್ಳೆಯ ಕವನ.
ಪ್ರತ್ಯುತ್ತರಅಳಿಸಿಮನಮುಟ್ಟುವ ಅರ್ಥಗರ್ಭಿತ ಕವನ,
ಪ್ರತ್ಯುತ್ತರಅಳಿಸಿ